Monday, October 2, 2023
Homeಕರಾವಳಿಪ್ರಿಯತಮೆಯನ್ನು ಕೊಂದು ನೇಣಿಗೆ ಶರಣಾದ ಹೂವಿನ ವ್ಯಾಪಾರಿ

ಪ್ರಿಯತಮೆಯನ್ನು ಕೊಂದು ನೇಣಿಗೆ ಶರಣಾದ ಹೂವಿನ ವ್ಯಾಪಾರಿ

- Advertisement -



Renault

Renault
Renault

- Advertisement -

ಸುರತ್ಕಲ್: ಪ್ರಿಯತಮೆಯನ್ನು ಕೊಂದ ಹೂವಿನ ವ್ಯಾಪಾರಿಯೊಬ್ಬ, ತಾನೂ ನೇಣಿಗೆ ಶರಣಾಗಿರುವ ಘಟನೆ ಸುರತ್ಕಲ್​ನ ಕುಳಾಯಿಯಲ್ಲಿ ನಡೆದಿದೆ.

ವಸಂತ್ (44) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ಕಳೆದ ಏಳೆಂಟು ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಿದ್ದ. ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು.

ಯಾವುದೋ ವೈಮನಸ್ಸಿನ ಕಾರಣ, ಬುಧವಾರ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮಾಹಿತಿಯಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಸುರತ್ಕಲ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಮೃತ ದೇಹವನ್ನು ಪೋಸ್ಟ್ ಮಾರ್ಟ್ಂ ಗೆ ಕಳುಹಿಸಿ ಕೊಡಲಾಯಿತು.

- Advertisement -

LEAVE A REPLY

Please enter your comment!
Please enter your name here

Most Popular

Recent Comments