- Advertisement -
ಬಂಟ್ವಾಳ : ತಾಲೂಕಿನ ಮೆಲ್ಕಾರ್ ಗುಡ್ಡೆಯಂಗಡಿ ಎಂಬಲ್ಲಿ, ತಲ್ವಾರ್ ದಾಳಿ ನಡೆಸಿ ರೌಡಿಶೀಟರ್ ಒಬ್ಬನನ್ನು ಹತ್ಯೆ ಮಾಡಲಾಗಿದೆ.
ಉಮ್ಮರ್ ಫಾರೂಕ್ ಯಾನೆ ಚೆನ್ನೆ ಫಾರೂಕ್ (32) ಎಂಬಾತನನ್ನು ಆತನ ಸ್ನೇಹಿತರೇ ಸೇರಿಕೊಂಡು ಹತ್ಯೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ವೈಯುಕ್ತಿಕ ಕಾರಣದಿಂದ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಇನ್ನು ದಿನಗಳ ಹಿಂದೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಟ ಹಾಗೂ ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರ ಬರ್ಬರ್ ಹತ್ಯೆ ನಡೆದಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕೊಲೆ ನಡೆದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.