- Advertisement -
ಮಂಗಳೂರು : ಸಾರ್ವಜನಿಕ ಜನ ಸಂಚಾರದ ಸರ್ವಿಸ್ ಬಸ್ಸನ್ನು ಖಾಸಗಿಯಾಗಿ ಮದುವೆ ಸಮಾರಂಭಕ್ಕೆ ಜನರನ್ನು ಕರೆದೊಯ್ಯುಲು ಉಪಯೋಗಿಸಿದ್ದಕ್ಕೆ ಟೂರಿಸ್ಟ್ ವಾಹನ ಮಾಲೀಕರು ಹಾಗೂ ಚಾಲಕರು ತಡೆದು ನಿಲ್ಲಿಸಿದ ಘಟನೆ ಡಿಸೆಂಬರ್ 7 ರ ಸೋಮವಾರ ತೊಕ್ಕೊಟ್ಟಿನಲ್ಲಿ ನಡೆದಿದೆ.
ವಿವಾಹ ಸಮಾರಂಭಕ್ಕೆ ಟೂರಿಸ್ಟ್ ಬಸ್ಗಳು ಇವೆ, ವಿವಾಹ ಸಮಾರಂಭಕ್ಕೆ ತೆರಳುವ ಜನರನ್ನು ಸರ್ವಿಸ್ ಬಸ್ಗಳು ಸಾಗಿಸಬೇಕಾಗಿಲ್ಲ ಎಂದು ಟೂರಿಸ್ಟ್ ವಾಹನದ ಮಾಲೀಕರು ಮತ್ತು ಚಾಲಕರು ಹೇಳಿದರು.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ಸಂಚಾರ ಪೊಲೀಸ್ ಸಿಬ್ಬಂದಿಗಳು ಧಾವಿಸಿದರು.