ಬಂಟ್ವಾಳ : ಹಣಕಾಸಿನ ವಿಚಾರದಲ್ಲಿ ಆಕ್ಟರ್ ಕಮ್ ನಟನಾಗಿದ್ದ ಸುರೇಂದ್ರ ಬಂಟ್ವಾಳ್ ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಸ್ತಿ ಪಡ್ಪುವಿನ ಆತನ ಅಪಾರ್ಟ್ಮೆಂಟ್ನಲ್ಲಿ ಈ ಕೃತ್ಯ ನಡೆದಿದೆ. ಸುರೇಂದ್ರ ರೌಡಿಶೀಟರ್ ಕೂಡ ಆಗಿದ್ದ. ಬಿಸಿ ರೋಡ್ನ ಆತನ ಅಪಾರ್ಟ್ಮೆಂಟ್ನಲ್ಲಿ ಶವ ಪತ್ತೆಯಾಗಿದೆ.
2018ರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಸುರೇಂದ್ರ ಕತ್ತಿಯಿಂದ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದ ಸುರೇಂದ್ರ. ಕತ್ತಿ ಬೀಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರೌಡಿ ಶೀಟರ್ ಆಗಿದ್ದ ಸುರೇಂದ್ರ ಬಲಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ. ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಸುರೇಂದ್ರ ಬಂಟ್ವಾಳ್ 2014ರಲ್ಲಿ ಬಿಡುಗಡೆಯಾದ ಚಾಲಿ ಪೊಲೀಲು ಮತ್ತು ಸವರ್ಣ ದೀರ್ಘ ಸಂಧಿ ಚಿತ್ರಗಳಲ್ಲಿ ನಟಿಸಿದ್ದರು.