ಬೆಂಗಳೂರು: ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಸಭೆಗೆ ಈ ಹಿಂದೆ ಮಾಹಿತಿ ನೀಡಿದಂತೆ ಕಾಂಗ್ರೆಸ್ ಪಕ್ಷ ಹಾಜರಾಗಲಿಲ್ಲ.
ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ನಿನ್ನೆ ಸ್ಪೀಕರ್ ಗೆ ಸಿದ್ದರಾಮಯ್ಯ ಪತ್ರ ಬರೆದ ತಕ್ಷಣ ವಿರೋಧ ಪಕ್ಷದ ನಾಯಕರು,ಡಿ.ಕೆ ಶಿವಕುಮಾರ್,ಆರ್.ವಿ. ದೇಶಪಾಂಡೆ ಜತೆ ಚರ್ಚೆ ಮಾಡಿದ್ದೇನೆ.
ಸಭೆಗೆ ಬರುವಂತೆ ಮನವಿ ಮಾಡಿದ್ದೇನೆ.ಹಿಂದಿನ ಕಲಾಪ ಸಲಹಾ ಸಮಿ ತಿ ಸಭೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಗೊಂದಲ ಇದ್ರು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬಹುದು. ಕುಳಿತು ಚರ್ಚೆ ಮಾಡಿದ್ರೆ ಎಲ್ಲವೂ ಬಗೆಹರಿಯುತ್ತೆ. ನಾವು ಹಿರಿಯರು ಸೇರಿ ಚರ್ಚೆ ಮುಂದಿನ ನಿರ್ಧಾರ ತಿಳಿಸುತ್ತೇವೆಂದು ಹೇಳಿದ್ದಾರೆ.
ಅವರ ಒತ್ತಾಯಗಳೇನು ಎಂಬುದು ತಿಳಿದಿಲ್ಲ. ಅವರು ಸಭೆಗೆ ಬಂದ್ರೆ ಚರ್ಚೆ ಮಾ ಡಬಹುದು.ಜನರ ಅಗತ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡಬಹುದು ಅಂತ ಮನವಿ ಮಾಡಿದ್ದೇನೆ. ಮುಕ್ತ ಮನಸಿ ನಿಂದ ಕುಳಿತು ಚರ್ಚೆ ಮಾಡಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ.ನಾವು ಮುಕ್ತ ಮನಸ್ಸಿನಿಂದ ಇದ್ದೇವೆ ಎಂದರು.
ಸಭೆ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಿನ್ನೆ ಸಿದ್ದರಾಮಯ್ಯ ಪತ್ರ ಬರೆದ ತಕ್ಷಣ ನಾನೇ ಸಿದ್ದರಾಮಯ್ಯ ಗೆ ಕರೆ ಮಾಡಿ ಮಾತನಾಡಿದೆ. ಬಿಎಸಿ ಸಭೆಗೆ ಬರುವಂತೆ ಮನವಿ ಮಾಡಿದೆ. ಸದನ ನಡೆಸಲು ಆಡ ಳಿತ ಮತ್ತು ವಿಪಕ್ಷ ಎರಡು ಮುಖ್ಯ. ಇಬ್ಬರನ್ನ ಪರಿಗಣಿಸಬೇಕು.ಅಭಿಪ್ರಾಯ ಬೇಧ ಸಾಮಾನ್ಯ.ಇಬ್ಬರ ಮೇಲೂ ಜವಾಬ್ದಾರಿ ಇದೆ. ಅವರು 60 ವರ್ಷ ದೇಶ ಆಳಿದ ಅನುಭವ ಕಾಂಗ್ರೆಸ್ ಪಕ್ಷಕ್ಕೆ ಇದೆ.ಅವರನ್ನ ಕರೆದು ಮಾತುಕತೆ ನಡೆಸುತ್ತೇನೆ ಎಂದರು.
ಅಭಿಪ್ರಾಯ ಬೇದಗಳು ಇರುತ್ತವೆ,ಆದ್ರೆ ಸದನವನ್ನ ನಡೆಸಬೇಕಾಗುತ್ತದೆ. ಹಾಗಾಗಿ ಬಹಿಷ್ಕಾರದ ಮಾರ್ಗ ವ್ಯವ ಸ್ಥೆಗೆ ಸರಿಯಾದುದ್ದಲ್ಲ. ಸಿದ್ದರಾಮಯ್ಯನವರಿಗಾಗಲಿ ಕಾಂಗ್ರೆಸ್ ಇತರೆ ನಾಯಕರಿರಾಗಲಿ ನಾನು ಸಂವಿಧಾನದ ಬಗ್ಗೆ ಹೇಳಿಕೊಡುವಂತಿಲ್ಲ. ಎಲ್ಲರಿಗೂ ಸಂವಿಧಾನ,ವ್ಯವಸ್ಥೆ ಬಗ್ಗೆ ಗೊತ್ತಿದೆ.50-60ವರ್ಷ ಕಾಂಗ್ರೆಸ್ ನವರೇ ಆಡ ಳಿತ ನಡೆಸಿದ್ದಾರೆ. ಅವರಿಗೆ ಹೇಳಿಕೊಡುವಂತದ್ದೇನಿಲ್ಲ. ಸಭೆಗೂ ಬಂದು ಎಲ್ಲರೂ ಸೇರಿ ಚರ್ಚಿಸಿ,ಅಭಿಪ್ರಾಯ ವ್ಯಕ್ತಪಡಿಸಬೇಕು. ಸಿದ್ದರಾಮಯ್ಯ ನವರ ಜೊತೆ ಚರ್ಚಿಸಿ ಮತ್ತೊಮ್ಮೆ ಬಿಎಸಿ ಸಭೆ ಕರೆಯುತ್ತೇನೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿಲ್ಲ.ಕಳೆದ ಬಾರಿ ಸದನದಲ್ಲಿ ಪ್ರಸ್ತಾಪ ಆಗಿದ್ದಾಗ ಎಲ್ಲ ವಿವರ ಕೊಟ್ಟಿದ್ದೆ. ಬಹಿಷ್ಕಾರ ಒಂದೇ ಎಲ್ಲದಕ್ಕೂ ಮಾರ್ಗವಲ್ಲ. ಸದನದಲ್ಲಿ ಭಾಗವಹಿಸಿ ಅವರ ಅಭಿಪ್ರಾಯ ತಿಳಿಸಬೇಕು ಎಂದರು.