Sunday, May 28, 2023
HomeUncategorizedಆಕೆ ತಾಳಿ ಕಿತ್ತೆಸೆದ್ಲು : ಆದ್ರೂ ಮದುವೆ

ಆಕೆ ತಾಳಿ ಕಿತ್ತೆಸೆದ್ಲು : ಆದ್ರೂ ಮದುವೆ

- Advertisement -


Renault

Renault
Renault

- Advertisement -

ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಆಕೆಯ ಮನೆಯಲ್ಲೇ ಬಲವಂತವಾಗಿ ಮದುವೆಯಾಗಿ ಅಪಹರಿಸಿಕೊಂಡು ಹೋದ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು, ಅಂದು ಹಾಗೂ ಆ ಬಳಿಕ ನಡೆದ ಬೆಳವಣಿಗೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾಳೆ.

ಜನವರಿ 25ರಂದು ದಕ್ಷಿಣಕನ್ನಡದ ಪುತ್ತೂರಿನ ಸುಜಿತ್ ಕೃಷ್ಣ ಎಂಬವರೊಂದಿಗೆ ಹಸೆಮಣೆ ಏರಬೇಕಾಗಿದ್ದ ಯುವತಿಯನ್ನು, ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾದ ಸತೀಶ್​ ಎಂಬಾತ ಜ. 21ರಂದು ಆಕೆಯ ಮನೆಯಲ್ಲೇ ಬಲವಂತವಾಗಿ ತಾಳಿ ಕಟ್ಟಿದ್ದ. ನಂತರ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದ. ಈ ಬಗ್ಗೆ ಯುವತಿಯ ಮನೆಯವರು ಸಕಲೇಶಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದರು. ಇದೀಗ ಯುವತಿಯಿಂದ ಪ್ರಕರಣದ ಕುರಿತು ಪೊಲೀಸರು ಹೇಳಿಕೆ ಪಡೆದಿದ್ದು, ಆ ಕುರಿತ ಮಾಹಿತಿ ಬಹಿರಂಗಗೊಂಡಿದೆ.

ನನ್ನ ಜತೆ ಮಾತನಾಡಲು ಮನೆಗೆ ಬಂದಿದ್ದ ಸತೀಶ್​, ಕೊಲೆ ಬೆದರಿಕೆ ಒಡ್ಡಿದ. ಮಾತ್ರವಲ್ಲ ಬಲವಂತವಾಗಿ ತಾಳಿಯನ್ನೂ ಕಟ್ಟಿದ. ಎರಡು ಸಲ ತಾಳಿಯನ್ನು ಕಿತ್ತೆಸೆದರೂ ಬಿಡದೆ ನಂತರ ನನ್ನನ್ನು ಕೊಡಗಿನ ರೆಸಾರ್ಟ್​ಗೆ ಕರೆದೊಯ್ದ. ಸತೀಶ್ ಹಾಗೂ ಆತನ ಅಣ್ಣ ಇಬ್ಬರೂ ಸೇರಿ ಥಳಿಸಿ, ಚಿತ್ರಹಿಂಸೆ ನೀಡಿದರು. ‘ನಾನೇ ಓಡಿ ಬಂದೆ, ನನಗೆ ಒಪ್ಪಿಗೆ ಇದೆ ಎಂದು ಹೇಳು, ಆಸ್ತಿ ಸೈಟು ಒಡವೆ ಕೊಡುತ್ತೇವೆ’ ಎಂದು ಸತೀಶ್​ ಅಕ್ಕ ಆಮಿಷವೊಡ್ಡಿದರೂ ನಾನು ಯಾವುದಕ್ಕೂ ಒಪ್ಪಿರಲಿಲ್ಲ. ಬೇಸತ್ತು ಕೊಡಗಿನ ರೆಸಾರ್ಟ್​ನಲ್ಲೇ 2 ಬಾಟಲಿ ಮಸ್ಕಿಟೋ ಲಿಕ್ವಿಡ್ ಕುಡಿದಿದ್ದೆ. ಆದರೆ ಅವರೆಲ್ಲ ಸೋಪ್​ ನೀರು ಕುಡಿಸಿ ಬದುಕಿಸಿದ್ದರು ಎಂದು ನೋವು ತೋಡಿಕೊಂಡಿರುವ ಸಂತ್ರಸ್ತೆ, ನಾನು ಯಾವುದೇ ಕಾರಣಕ್ಕೂ ಸತೀಶ್ ಜತೆಗೆ ಹೋಗುವುದಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು, ಸತೀಶ್ ಹಾಗೂ ಆತನ ಸ್ನೇಹಿತರನ್ನೂ ಬಂಧಿಸಿ ಕ್ರಮಕೈಗೊಳ್ಳಿ ಎಂದು ಪೊಲೀಸರಲ್ಲಿ ವಿನಂತಿ ಮಾಡಿಕೊಂಡಿದ್ದಾಳೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments