Saturday, June 3, 2023
HomeUncategorizedಸಾಲ ಪಡೆದಿದ್ದು ಮಗ: ಅಪ್ಪನನ್ನ ಕಿಡ್ನಾಪ್ ಮಾಡಿದರು!

ಸಾಲ ಪಡೆದಿದ್ದು ಮಗ: ಅಪ್ಪನನ್ನ ಕಿಡ್ನಾಪ್ ಮಾಡಿದರು!

- Advertisement -


Renault

Renault
Renault

- Advertisement -

ಯಾದಗಿರಿ: ಮಗ (ತೇಜು) ಮಾಡಿದ ತಪ್ಪಿಗೆ ತಂದೆಯನ್ನು (ಧಾರು ರಾಠೋಡ್) ಸಾಲಗಾರರು ಕಿಡ್ನಾಪ್​ ಮಾಡಿರುವ ಘಟನೆ ಶಹಾಪುರ ತಾಲೂಕಿನ ತಾಂಡಾದಲ್ಲಿ ನಡೆದಿದೆ.

ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದರೂ ಗಮನ ಹರಿಸಿಲ್ಲ ಎಂದು ಭೀಮರಾಯನಗುಡಿ ಠಾಣೆ ಪೊಲೀಸರ ವಿರುದ್ಧ ಧಾರು ಪತ್ನಿ ತಿಪ್ಪಬಾಯಿ ಆರೋಪಿಸಿದ್ದಾರೆ.

ಮಗ ತೇಜು ಸಾಲಗಾರರ ಬಳಿ 25 ಸಾವಿರ ರೂ ಸಾಲ ಪಡೆದಿದ್ದರು. ಹಣ ಪಾವತಿಸದ ಕಾರಣ ತಂದೆಯನ್ನು ಕಿಡ್ನಾಪ್​ ಮಾಡಿ, ಬಡ್ಡಿ ಸೇರಿ 1.20 ಲಕ್ಷ ರೂ.

ವಾಪಸ್ ನೀಡುವಂತೆ ಸಾಲಗಾರರು ಕಿರುಕುಳ ನೀಡುತ್ತಿದ್ದಾರೆ. 3 ತಿಂಗಳ ಹಿಂದೆ ಧಾರು ಕಿಡ್ನಾಪ್​ ಆಗಿದ್ದಾರೆ. ಸಂತೋಷ್​ ಗ್ಯಾಂಗ್​ ಅವರನ್ನು ಅಪಹರಣ ಮಾಡಿದೆ. ಈ ಕುರಿತಂತೆ ಪೊಲೀಸರು ಯಾವುದೇ ಗಮನ ಹರಿಸಿಲ್ಲ. ಗಂಡನನ್ನು ಹುಡುಕಿಕೊಡಿ ಎಂದು ಧಾರು ಪತ್ನಿ ತಿಪ್ಪಬಾಯಿ ಎಸ್​ಪಿ ಮೊರೆ ಹೋಗಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments