Monday, October 2, 2023
Homeಕರಾವಳಿಕೇರಳದಲ್ಲಿ ಹೆಚ್ಚಿದ ಮಹಾಮಾರಿ‌ ಕೊರೊನಾ…!!!ಕರ್ನಾಟಕ ಪ್ರವೇಶದ ಕರಾವಳಿ ಗಡಿ ಪ್ರದೇಶ ಬಂದ್…!!!

ಕೇರಳದಲ್ಲಿ ಹೆಚ್ಚಿದ ಮಹಾಮಾರಿ‌ ಕೊರೊನಾ…!!!ಕರ್ನಾಟಕ ಪ್ರವೇಶದ ಕರಾವಳಿ ಗಡಿ ಪ್ರದೇಶ ಬಂದ್…!!!

- Advertisement -



Renault

Renault
Renault

- Advertisement -

ಕೇರಳದಲ್ಲಿ ಹೆಚ್ಚಿದ ಮಹಾಮಾರಿ‌ ಕೊರೊನಾ…!!!

ಕರ್ನಾಟಕ ಪ್ರವೇಶದ ಕರಾವಳಿ ಗಡಿ ಪ್ರದೇಶ ಬಂದ್…!!!

ಕನ್ಯಾನ, ಬಾಯಾರು ರಸ್ತೆ ಬಂದ್ ಮಾಡಿದ ಪೊಲೀಸರು…!!!

ಮಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಪ್ರವೇಶಿಸುವ ತಲಪಾಡಿ ಸಹಿತ 4 ಪ್ರಮುಖ ಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂತರ್ ರಾಜ್ಯ ಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಈ ಆದೇಶ ಹೊರಡಿಸಿದ್ದಾರೆ.

ಈ ನಡುವೆ ಬಂಟ್ವಾಳ ತಾಲೂಕಿನ ಕನ್ಯಾನ ಬಾಯರು ರಸ್ತೆ, ಕನ್ಯಾನ ,ಆನೆಕಲ್ಲು ರಸ್ತೆಗಳಲ್ಲಿ ಕೇರಳ ಪ್ರವೇಶಿಸುವ ರಸ್ತೆಯನ್ನು ಕೋವಿಡ್ ನಿಯಂತ್ರಣಕ್ಕಾಗಿ ಈಗಾಗ್ಲೇ ಬಂದ್ ಮಾಡಲಾಗಿದೆ.

ಕರ್ನಾಟಕಕ್ಕೆ ಪ್ರವೇಶಿಸಲು ನಾಲ್ಕು ಚೆಕ್ ಪೋಸ್ಟ್‌ಗಳ ಮೂಲಕ ಮಾತ್ರ ಸಂಚರಿಸಬಹುದಾಗಿದ್ದು, ಉಳಿದ ಎಲ್ಲ ಪ್ರವೇಶ ಕೇಂದ್ರಗಳು ಸೋಮವಾರದಿಂದ ಮುಚ್ಚಲ್ಪಡುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಫೆ. 22ರಿಂದ ದ.ಕ., ಕೇರಳ ರಾಜ್ಯದ ಕಾಸರಗೋಡು ಗಡಿಭಾಗದಲ್ಲಿ 4 ಚೆಕ್‌ಪೋಸ್ಟ್ ಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಉಳಿದಂತೆ ಎಲ್ಲ ಗಡಿಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ತಲಪಾಡಿ, ಸಾರಡ್ಕ, ನೆಟ್ಟಣಿಗೆ ಮುಡ್ನೂರು -ಮೇನಾಲ ಮತ್ತು ಜಾಲ್ಸೂರಿನಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಅಲ್ಲಿ ಆರೋಗ್ಯ ಇಲಾಖೆಯ ಒಂದು ತಂಡ ನಿಯೋಜಿಸಿ ವೈದ್ಯಕೀಯ ತಪಾಸಣೆ ಹಾಗೂ ಸ್ಕ್ರೀನಿಂಗ್ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರೂ 72 ಗಂಟೆಯೊಳಗೆ ನಡೆಸಲಾದ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯ. ಇದನ್ನು ಪರಿಶೀಲಿಸಿಯೇ ಜಿಲ್ಲೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಕ್ಯಾಟ್ ಪರೀಕ್ಷಾ ವರದಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದೈನಂದಿನ ಪ್ರಯಾಣಿಕರ ಮಾಹಿತಿಯನ್ನು ಪ್ರತ್ಯೇಕವಾಗಿ ಪಡೆಯಬೇಕು. ಪ್ರತಿದಿನ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮ್ಮಗುರುತಿನ ಚೀಟಿಯನ್ನು ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು

ಚೆಕ್‌ಪೋಸ್ಟ್‌ನಲ್ಲಿ ಸಲ್ಲಿಸಬೇಕು. ಆ್ಯಂಬುಲೆನ್ಸ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

- Advertisement -

LEAVE A REPLY

Please enter your comment!
Please enter your name here

Most Popular

Recent Comments