- Advertisement -
ಪುತ್ತೂರು: ಗಾಳ ಹಾಕಿ ಮೀನು ಹಿಡಿಯಲು ಹೋದ ತಂದೆ, ಮಗ, ಅಳಿಯನ ಪೈಕಿ ತಂದೆ ಹೊಳೆಯಲ್ಲಿ ಕಣ್ಮರೆಯಾದ ಘಟನೆ ನರಿಮೊಗ್ರು ಗ್ರಾಮ ಶಾಂತಿಗೋಡು ದಾರಂದಬಾಗಿಲು ಕುಮಾರಧಾರ ಹೊಳೆಯಲ್ಲಿ ನಡೆದಿದೆ.
ಮುಂಡೂರು ಗ್ರಾಮದ ಕಡ್ಯ ತೌಡಿಂಜ ನಿವಾಸಿ ಕಾಂತರ ಎಂಬವರು ಕಣ್ಮರೆಯಾಗಿದ್ದು, ಕಾಂತರ ಅವರ ಪುತ್ರ ಮತ್ತು ಅಳಿಯ ಇಂದು ಸಂಜೆ ಶಾಂತಿಗೋಡು ಕುಮಾಧಾರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು. ಹೊಳೆಯಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಕಾಂತರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಮತ್ತು ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.