Tuesday, June 6, 2023
Homeರಾಜಕೀಯತಣಿಯದ ರೇಣುಕಾಚಾರ್ಯ: ಅತೃಪ್ತರ ಜೊತೆಗೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ!

ತಣಿಯದ ರೇಣುಕಾಚಾರ್ಯ: ಅತೃಪ್ತರ ಜೊತೆಗೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ!

- Advertisement -


Renault

Renault
Renault

- Advertisement -

ದಾವಣಗೆರೆ, (ಜ.17): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಇದು ಸದ್ಯಕ್ಕೆ ಶಮನವಾಗೋ ಲಕ್ಷಣಗಳು ಕಾಣುತ್ತಿಲ್ಲ.ಹೌದು…ಇದಕ್ಕೆ ಪೂರಕವೆಂಬಂತೆ ಅಸಮಾಧಾನಗೊಂಡ ಶಾಸಕರೆಲ್ಲರೂ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.ಬಹಿರಂಗ ಹೇಳಿಕೆ ನೀಡುತ್ತಿರೋ ಅಸಮಾಧಾನಿತ ಶಾಸಕರಿಗೆ ಬಿಜೆಪಿ ಸಾರಥಿ ಪರೋಕ್ಷ ಎಚ್ಚರಿಕೆಹೊನ್ನಾಳಿಯಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಅಸಮಾಧಾನಗೊಂಡ ಶಾಸಕರೆಲ್ಲಾ ನನಗೆ ಕಾಲ್ ಮಾಡಿದ್ದು, ನಾವೇಲ್ಲಾ ಒಂದು ಕಡೆ ಸೇರುತ್ತಿದ್ದೇವೆ. ಆದ್ರೆ ಯಾವುದೇ ಹೋಟೆಲ್ ರೇಸಾರ್ಟ್‌ನಲ್ಲಿ ಅಲ್ಲ ಮನೆಗಳಲ್ಲೇ ಸಭೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ರೇಸಾರ್ಟ್ ರಾಜಕಾರಣ ಮಾಡಿ ತಪ್ಪು ಮಾಡಿದ್ದೇವೆ. ಮತ್ತೆ ಅಂತಹ ತಪ್ಪನ್ನು ಮಾಡುವುದಿಲ್ಲ. ನಮ್ಮ ಹೋರಾಟ ಯಡಿಯೂರಪ್ಪನ ವಿರುದ್ದ ಅಲ್ಲ. ಯಡಿಯೂರಪ್ಪ ಯಾವಾಗಲು ನಮ್ಮ ನಾಯಕರೇ.ಅವರ ಬಗ್ಗೆ ಇಲ್ಲದ ಮಾತನಾಡಿದ್ರೆ ಬಾಯಲ್ಲಿ ಹುಳು ಬೀಳುತ್ತೆ. ಸಚಿವ ಸಂಪುಟದಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ನಮ್ಮ ಹೋರಾಟ. ನಾನು ಅತೃಪ್ತರ ನಾಯಕನಲ್ಲ. ರೆಬೆಲ್ ಅಲ್ಲ ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments