ನವದೆಹಲಿ (ಫೆ.20): ಕಾಂಗ್ರೆಸ್ ಹಿರಿಯ ಮುಖಂಡ ಸತೀಶ್ ಶರ್ಮಾ ಅವರ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ಶುಕ್ರವಾರ ನೆರವೇರಿಸಲಾಯಿತು.
ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶವಕ್ಕೆ ಹೆಗಲು ಕೊಡುವ ಮೂಲಕ ಅಂತ್ಯಕ್ರಿಯೆಗೆ ನೆರವಾದರು. ಗಾಂಧಿ ಕಟುಂಬಕ್ಕೆ ನಿಷ್ಠರಾಗಿದ್ದ ಸತೀಶ್ ಶರ್ಮಾ (73) ಅವರು ಗೋವಾದಲ್ಲಿ ಬುಧವಾರ ನಿಧನರಾಗಿದ್ದರು.
ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಓಕೆ ಎಂದ ರಾಹುಲ್: ಇನ್ಮುಂದೆ ಟಗರು ಆಟ ಶುರು .
ರಾಹುಲ್ ಗಾಂಧಿ ಅವರಿಗೆ ರಾಜಕೀಯದ ಆರಂಭಿಕ ದಿನಗಳಲ್ಲಿ ಗುರುವಿನ ಸ್ಥಾನದಲ್ಲಿದ್ದು ಮಾರ್ಗದರ್ಶನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ತಮ್ಮ ರಾಜಕೀಯ ಗುರುವಿನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ನ ಹಲವು ಮುಖಂಡರು ಭಾಗಿಯಾಗಿದ್ದರು.