ಯೂತ್ ಕಾಂಗ್ರೆಸ್ ಸುರತ್ಕಲ್ ಬ್ಲಾಕ್ ನ ಉಪಾಧ್ಯಕ್ಷರಾಗಿ ಮಹಮ್ಮದ್ ಸಿನಾನ್…!!!
ಸುರತ್ಕಲ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಡಿಯಲ್ಲಿ ಪಳಗಿದ, ಮಿಥುನ್ ರೈ ಮತ್ತು ಮಹಮ್ಮದ್ ಹಾರೀಸ್ ನಲಪ್ಪಾಡ್ ಗರಡಿಯಲ್ಲಿ ಬೆಳೆದ ಕೆ.ಮಹಮ್ಮದ್ ಸಿನಾನ್ ಇದೀಗ ಯೂತ್ ಕಾಂಗ್ರೆಸ್ ನ ಸುರತ್ಕಲ್ ಬ್ಲಾಕ್ ನ ಉಪಾಧ್ಯಕ್ಷರಾಗಿದ್ದಾರೆ.
ಹೌದು ನಾಯಕತ್ವ ಗುಣವನ್ನ ಹೊಂದಿರುವ ಸಿನಾನ್ ಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ. ಈ ಹಿಂದೆ ಯೂತ್ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷರಾಗಿದ್ದ ಇವರು, ಬಳಿಕ ಸೋಶಿಯಲ್ ಮೀಡಿಯಾ ಕಾರ್ಡಿನೇಟರ್ ಆಗಿ ಆಯ್ಕೆಗೊಂಡಿದ್ದರು.
ಇದೀಗ ಅವರು ಪಕ್ಷದಲ್ಲಿ ದುಡಿದ ಸೇವೆಗಾಗಿ ಅವರನ್ನ ಯೂತ್ ಕಾಂಗ್ರೆಸ್ ನ ಸುರತ್ಕಲ್ ಬ್ಲಾಕ್ ನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ನೇಮಕ ಮಾಡಿದೆ.